Sahasi Monalisa kannada lesson grade VI. Monalisa, a second-grade student at UGMA School in Odisha, was on her way home from school when she noticed two bulls fighting by the roadside. At the same time, two cars were approaching from opposite directions, and a blind boy was walking along the street. Suddenly, the bulls attacked the boy, causing him to bleed and scream in pain. Without hesitation and disregarding her own safety, Monalisa rushed to his aid and saved him. One of the car drivers stopped to treat the injured boy and praised Monalisa for her bravery. Sahasi Monalisa, In recognition of her courage, she was honored with the Geeta Chopra Award.
ಸಾಹಸಿ ಮೊನಾಲಿಸಾ
I. ಪದಗಳ ಅರ್ಥ ಬರೆಯಿರಿ. (Write the word meaning)
ಅಂಚು = ಕೊನೆ, ಅನುಕರಣೀಯ = ಅನುಸರಿಸುವಂತದ್ದು,
ಒಸರು = ಸೋರು, ಚಿನ್ನಾಟ = ವಿನೋದದ ಆಟ,
ತಿವಿ = ಇರಿ, ಚುಚ್ಚು, ಬ್ಯಾಂಡೇಜ್ = ಗಾಯದ ಮೇಲೆ ಕಟ್ಟುವ ಪಟ್ಟಿ,
ಮುಗ್ಧ = ಸರಳ ಸ್ವಭಾವ, ರಾಜ್ಯಪಾಲ = ರಾಜ್ಯದ ಮುಖ್ಯಸ್ಥ,
ಸಹಾನುಭೂತಿ = ದಯೆ, ಅನುಕಂಪ ಹಂಗು = ಆಸೆ,
ಅಂತಕರಣ = ದಯೆ, ಅಮೋಘ = ಸಾರ್ಥಕವಾದ,
ಗುದ್ದಾಟ = ಹೊಡೆದಾಟ ಜೋರು = ವೇಗ, ರಭಸ,
ಪುರಸ್ಕಾರ = ಪ್ರಶಸ್ತಿ ಮುಗ್ಧ = ಸರಳ ಸ್ವಭಾವ,
ಮೈತ್ರಿ = ಸ್ನೇಹ ರೂಢಿ = ಅಭ್ಯಾಸ, ಬಳಕೆ
ಸಾಹಸ = ಪರಾಕ್ರಮ ಹೆದರು = ಭಯಪಡು
II. ಪ್ರಶ್ನೆಗಳು
ಅ) ಈ ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ. (Answer the following in one sentence)
೧. ಮೊನಾಲಿಸಾ ಯಾವ ಶಾಲೆಯಲ್ಲಿ ಓದುತ್ತಿದ್ದಳು?
ಉ: ಮೊನಾಲಿಸಾ ಯು.ಜಿ.ಎಂ.ಇ ಶಾಲೆಯಲ್ಲಿ ಓದುತ್ತಿದ್ದಳು.
೨. ಮೊನಾಲಿಸಾ ಹೋರಿಯ ತಿವಿತದಿಂದ ಹೇಗೆ ಪಾರಾದಳು?
ಉ: ರಸ್ತೆಯ ಬದಿಗೆ ಓಡಿ ಮೊನಾಲಿಸಾ ಹೋರಿಯ ತಿವಿತದಿಂದ ಪಾರಾದಳು.
೩. ಹೋರಿಯ ತಿವಿತಕ್ಕೆ ಒಳಗಾದ ಕುರುಡು ಹುಡುಗ ಏನೆಂದು ಕೂಗಿಕೊಂಡನು?
ಉ: ಹೋರಿಯ ತಿವಿತಕ್ಕೆ ಒಳಗಾದ ಕುರುಡು ಹುಡುಗ “ನನ್ನನ್ನು ಕಾಪಾಡಿ! ಕಾಪಾಡಿ!” ಎಂದು ಕೂಗಿಕೊಂಡನು.
೪. ಜಿಲ್ಲಾಧಿಕಾರಿಗಳು ಯಾರ ಸಾಹಸದ ಕಥೆಯನ್ನು ನೆನಪಿಸಿದರು?
ಉ: ಜಿಲ್ಲಾಧಿಕಾರಿಗಳು ಅಬ್ದುಲ ಹಮೀದನ ಸಾಹಸದ ಕಥೆಯನ್ನು ನೆನಪಿಸಿದರು.
೫. ಭಾರತ ಸರ್ಕಾರ ಮೊನಾಲಿಸಾಗೆ ಯಾವ ಪ್ರಶಸ್ತಿ ನೀಡಿತು?
ಉ: ಭಾರತ ಸರ್ಕಾರ ಮೊನಾಲಿಸಾಗೆ ಗೀತಾ ಛೋಪ್ರಾ ಪ್ರಶಸ್ತಿ ನೀಡಿತು.
೬. ಮೊನಾಲಿಸಾಳ ತಂದೆ ತಾಯಿಯ ಹೆಸರೇನು?
ಉ: ಮೊನಾಲಿಸಾಳ ತಂದೆಯ ಹೆಸರು ದಿಜರಾಜ್ ಮಲ್ಲಿಕ್.
ಆ) ಈ ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿರಿ. (Answer the following in two-three sentences)
೧. ಮೊನಾಲಿಸಾ ಕುರುಡು ಹುಡುಗನನ್ನು ಹೇಗೆ ಕಾಪಾಡಿದಳು?
ಉ: ಮೊನಾಲಿಸಾ ಕುರುಡು ಹುಡುಗನ ಕೈ ಹಿಡಿದು ದರದರನೆ ಎಳೆದು ರಸ್ತೆಯ ಅಂಚಿಗೆ ತಂದಳು. ಹೀಗೆ ಅವನನ್ನು ಕಾಪಾಡಿದಳು.
೨. ಕಾರಿನ ಚಾಲಕ ಕುರುಡು ಹುಡುಗನಿಗೆ ಯಾವ ರೀತಿ ಚಿಕಿತ್ಸೆ ನೀಡಿದನು?
ಉ: ಕಾರಿನ ಚಾಲಕ ಕಾರಿನಲ್ಲಿದ್ದ ಪ್ರಥಮ ಚಿಕಿತ್ಸೆ ಪೆಟ್ಟಿಗೆಯನ್ನು ತೆಗೆದ. ರಕ್ತ ಒಸರುತ್ತಿದ್ದ ಕಾಲನ್ನು ಡೆಟಾಲ್ ನಿಂದ ಒರೆಸಿ ಬ್ಯಾಂಡೇಜ್ ಕಟ್ಟಿದ.
೩. ಕಾರಿನ ಚಾಲಕ ಮೊನಾಲಿಸಾಳನ್ನು ಏನೆಂದು ಮುದ್ದಾಡಿದನು?
ಉ: “ಭೇಷ್ ಮಗು! ನಿನ್ನ ಧೈರ್ಯ ಮೆಚ್ಚಿದನು. ನಿನ್ನ ಸಮಯಪ್ರಜ್ಞೆ ಒಬ್ಬ ಕುರುಡನ ಜೀವ ಉಳಿಸಿತು. ನಿನ್ನ ಸಹಾನುಭೂತಿ ದೊಡ್ಡದು” ಎಂದು ಕಾರಿನ ಚಾಲಕ ಮೊನಾಲಿಸಾಳನ್ನು ಮುದ್ದಾಡಿದನು.
೪. ಮೊನಾಲಿಸಾ ಕಾರಿನ ಚಾಲಕನಿಗೆ ಯಾವ ರೀತಿ ಧನ್ಯವಾದ ಹೇಳಿದಳು?
ಉ: ಮೊನಾಲಿಸಾ ಕಾರಿನ ಚಾಲಕನಿಗೆ “ಆಪತ್ತಿಗೆ ಆದವನೇ ನೆಂಟ. ಇತರರಿಗೆ ಸಹಾಯ ಮಾಡುವ ಒಳ್ಳೆಯ ಗುಣವಿರುವ ನಿನ್ನನ್ನು ದೇವರು ಚೆನ್ನಾಗಿಟ್ಟಿರಲಿ” ಎಂದು ಧನ್ಯವಾದ ಹೇಳಿದಳು.
೫. ಮೊನಾಲಿಸಾಳ ಮುಗ್ಧ ಮಾತುಗಳಿಗೆ ಕಾರಿನ ಚಾಲಕ ಏನೆಂದು ಪ್ರತಿಕ್ರಿಯಿಸಿದನು?
ಉ:ಮೊನಾಲಿಸಾಳ ಮುಗ್ಧ ಮಾತುಗಳಿಗೆ ಕಾರಿನ ಚಾಲಕ ಬೆರಗಾದನು. ಪರರ ನೋವನ್ನು ತನ್ನ ನೋವೆಂದು ತಿಳಿದ ಮೊನಾಲಿಸಾಳ ಭಾವನೆಯನ್ನು ಮೆಚ್ಚಿದನು.
೬.ಜಿಲ್ಲಾಧಿಕಾರಿ ಮೊನಾಲಿಸಾಳನ್ನು ಅಭಿನಂದಿಸಿ ಹೇಳಿದ ಮಾತುಗಳಾವುವು?
ಉ: “ದಯೆಯೇ ಧರ್ಮದ ಮೂಲ” ಎಂದು ಜಿಲ್ಲಾಧಿಕಾರಿ ಹೇಳಿ, ಮೊನಾಲಿಸಾಳ ಮಾನವೀಯತೆ ಮತ್ತು ಸಹಾನುಭೂತಿಯನ್ನು ಹೊಗಳಿದರು.
ಇ) ಈ ಕೆಳಗಿನ ಪ್ರಶ್ನೆಗಳಿಗೆ ಆರು – ಏಳು ವಾಕ್ಯಗಳಲ್ಲಿ ಉತ್ತರಿಸಿರಿ. (Answer the following in six-seven sentences)
೧. ಕುರುಡು ಹುಡುಗನು ಅಪಾಯಕ್ಕೆ ಹೇಗೆ ಒಳಗಾದನು?
ಉ: ರಸ್ತೆ ಬದಿಯಲ್ಲಿ ಎರಡು ಹೋರಿಗಳು ಗುದ್ದಾಟವಾಡಲು ಆರಂಭಿಸಿದವು. ಒಂದು ಮತ್ತೊಂದನ್ನು ತಿವಿಯುತ್ತಾ, ಇರಿಯುತ್ತಲಿದ್ದವು. ಅದೇ ಸಮಯದಲ್ಲಿ ಎರಡು ಕಾರುಗಳು ಎದುರು ಬದುರು ಬರುತ್ತಲ್ಲಿದ್ದವು. ಇದನ್ನು ಅರಿಯದ ಕುರುಡ ಹುಡುಗ ಈ ಎರಡು ಹೋರಿಗಳ ಮಧ್ಯ ಸಿಲುಕಿದನು. ಹೋರಿಗಳು ಅವನನ್ನು ತಿವಿದವು. ರಕ್ತ ಸೋರುತ್ತಿತ್ತು. ಕೆಳಗೆ ಬಿದ್ದ ಆ ಹುಡುಗ ಸಹಾಯಕ್ಕಾಗಿ ಕೂಗುತ್ತಿದ್ದ, ಹೀಗೆ ಕುರುಡು ಹುಡುಗನು ಅಪಾಯಕ್ಕೆ ಒಳಗಾದನು.
೨. ಮೊನಾಲಿಸಾಳ ಸಾಹಸ ಮೆಚ್ಚುವಂತಹದ್ದು ಏಕೆ?
ಉ: ರಸ್ತೆ ಬದಿಯಲ್ಲಿ ಎರಡು ಹೋರಿಗಳು ಗುದ್ದಾಟವಾಡಲು ಆರಂಭಿಸಿದವು. ಒಂದು ಮತ್ತೊಂದನ್ನು ತಿವಿಯುತ್ತಾ, ಇರಿಯುತ್ತಲಿದ್ದವು. ಅದೇ ಸಮಯದಲ್ಲಿ ಎರಡು ಕಾರುಗಳು ಎದುರು ಬದುರು ಬರುತ್ತಲ್ಲಿದ್ದವು. ಇದನ್ನು ಅರಿಯದ ಕುರುಡ ಹುಡುಗ ಈ ಎರಡು ಹೋರಿಗಳ ಮಧ್ಯ ಸಿಲುಕಿದನು. ಹೋರಿಗಳು ಅವನನ್ನು ತಿವಿದವು. ರಕ್ತ ಸೋರುತ್ತಿತ್ತು. ಕೆಳಗೆ ಬಿದ್ದ ಆ ಹುಡುಗ ಸಹಾಯಕ್ಕಾಗಿ ಕೂಗುತ್ತಿದ್ದ. ಅಲ್ಲೇ ಹೋಗುತ್ತಿದ್ದ ಮೊನಾಲಿಸಾ ಹೋರಿಗಳನ್ನೂ ಮತ್ತು ಕಾರುಗಳನ್ನೂ ಲೆಕ್ಕಿಸದೇ ಕುರುಡು ಹುಡುಗನ ಪ್ರಾಣ ಉಳಿಸಿದಳು. ತನ್ನ ಪ್ರಾಣದ ಬಗ್ಗೆ ಯೋಚಿಸದೇ ಇನ್ನೊಬ್ಬನ ಪ್ರಾಣ ಉಳಿಸಿದ ಅವಳ ಸಹಾಯ ಮಾಡುವ ಗುಣ ಹಾಗೂ ಧೈರ್ಯ ಮೆಚ್ಚುವಂತದು.
ಈ) ಕೆಳಗಿನ ಮಾತುಗಳನ್ನು ಯಾರು ಯಾರಿಗೆ ಹೇಳಿದರು? ಬರೆಯಿರಿ. (Who told whom)
೧. “ನನ್ನನ್ನು ಕಾಪಾಡಿ! ಕಾಪಾಡಿ!”
ಯಾರು ಹೇಳಿದರು? ಕುರುಡು ಹುಡುಗ ಹೇಳಿದನು.
ಯಾರಿಗೆ ಹೇಳಿದರು? ಜೋರಾಗಿ ಕೂಗಿದನು.
೨. “ನಿನ್ನ ಹೆತ್ತ ತಂದೆ ತಾಯಿಗಳು ಧನ್ಯರು.”
ಯಾರು ಹೇಳಿದರು? ಕಾರಿನ ಚಾಲಕ ಹೇಳಿದರು.
ಯಾರಿಗೆ ಹೇಳಿದರು? ಮೊನಾಲೀಸಾಗೆ ಹೇಳಿದರು.
೩. “ಭೇಷ್ ಮಗು! ನಿನ್ನ ಧೈರ್ಯ ಮೆಚ್ಚಿದನು”
ಯಾರು ಹೇಳಿದರು? ಕಾರಿನ ಚಾಲಕ ಹೇಳಿದರು.
ಯಾರಿಗೆ ಹೇಳಿದರು? ಮೊನಾಲೀಸಾಗೆ ಹೇಳಿದರು.
III. ಭಾಷಾಭ್ಯಾಸ
ಅ) ಬಿಡಿಸಿ ಬರೆಯಿರಿ. (Split the word)
೧. ಮುಖ್ಯೋಪಾಧ್ಯಾಯ = ಮುಖ್ಯ + ಉಪಾಧ್ಯಾಯ
೨. ವಾರ್ಷಿಕೋತ್ಸವ = ವಾರ್ಷಿಕ + ಉತ್ಸವ
೩. ಜಿಲ್ಲಾಧಿಕಾರಿ = ಜಿಲ್ಲೆ + ಅಧಿಕಾರಿ
೪. ಚೆನ್ನಾಗಿಟ್ಟರಲಿ = ಚೆನ್ನಾಗಿ + ಇಟ್ಟಿರಲಿ
ಆ) ಬಿಟ್ಟಸ್ಥಳ ತುಂಬಿರಿ. (Fill in the blanks)
೧. ʼಸಹಾನುಭೂತಿʼ ಪದದ ಅರ್ಥ ಅನುಕಂಪ.
೨. ರವಿಯ ಗಾಯಕ್ಕೆ ಬ್ಯಾಂಡೇಜ್ ಕಟ್ಟಲಾಯಿತು. ಗೆರೆ ಎಳೆದ ಪದವು ಅನ್ಯದೇಶಿಯ
೩. ʼಮೆಲ್ಲನೆʼ ಪದದ ವಿರುದ್ಧ ಪದ ಬೇಗನೆ.
೪. ʼಅಂಚುʼ ಪದದ ಸಮನಾರ್ಥಕ ಪದ ಕೊನೆ.
ಇ) ಸ್ವಂತ ವಾಕ್ಯದಲ್ಲಿ ಬರೆಯಿರಿ. (Make your own sentence)
೧. ದಷ್ಟಪುಷ್ಟ: ನಮ್ಮ ಮನೆಯ ನಾಯಿ ದಷ್ಟಪುಷ್ಟವಾಗಿದೆ.
೨. ಸಹಾಯ: ನಾವು ಎಲ್ಲರಿಗೂ ಸಹಾಯ ಮಾಡಬೇಕು
೩. ಬೆರಗಾಗು: ನನ್ನ ಮನೆಯಲ್ಲಿ ನನ್ನ ಗೆಳೆಯನನ್ನು ನೋಡಿ ಬೆರಗಾದೆನು.
೪. ಸಾಹಸ: ಜೀವನವು ಒಂದು ಸಾಹಸ.
೫. ಸನ್ಮಾನ: ಮೊನಾಲೀಸಾಗೆ ಶಾಲೆಯಲ್ಲಿ ಸನ್ಮಾನ ಮಾಡಿದರು.